ಇದೇ ಮೊದಲಾ..!!
ಮನಸ್ಸಿಗೊಂದು ನೆಮ್ಮದಿ, ಇಷ್ಟು ಸರಾಗವಾಗಿ ಇಷ್ಟೊಂದು ಹೇಗೆ ಆಗ್ತದೋ ಅಂತ ಒಂದು ಆತಂಕ ಇದ್ದೇ ಇತ್ತು.
ಮನಸ್ಸು ಅಷ್ಟೊಂದು ಭಾವನೆಗಳಿಗೆ ಹೇಗೆ ಸ್ಪಂದಿಸ್ತೋ.. ಲೆಖ್ಖ ಹಾಕುವಷ್ಟರಲ್ಲಿ ಮತ್ತೆ ಅಲ್ಲಿಂದ ದೂರ....
ನೆನಪುಗಳ ಹೆಕ್ಕಿಕೊಳ್ತಾ ಕುತ್ಗೊಂಡಿದೀನಿ.
ನಿನ್ನ ಯಾವಾಗ ನೋಡ್ತೀನೊ ಅನ್ನೊ ಧಾವಂತದಲ್ಲಿ ನಿನ್ನೆಡೆಗೆ ಬಂದಿದ್ದೆ. ನಿನ್ನಲ್ಲೆ ಉಳಿದುಕೊಂಡು ಬಿಟ್ಟೆ.
ಬಿಟ್ಟು ಬರುವಾಗ ಮನಸೆಷ್ಟು ರೊಚ್ಚಿಗೆದ್ದಿತ್ತು ಅಂದ್ರೆ, ಎನು ಮಾಡ್ಬೇಕು ಅಂತಾ ಹೊಳೀತಾನೆ ಇದ್ದಿಲ್ಲ.
ನಿನ್ನ ಜೊತೆ ಕಳೆದ ಕೆಲವು ಕ್ಷಣಗಳು ಅದೆಲ್ಲೊ ಕನಸಿನಲ್ಲಿ ನಡೆದಂಗಿದೆ.
ಮತ್ತೆ ರಾತ್ರಿಯ ಒಂಟಿತನದ ಎಕತಾನತೆಯ ನಿಶ್ಯಬ್ದ ಮಗ್ಗುಲುಗಳು. ನಡೆವ ದಾರಿಯಲ್ಲಿ ಜೊತೆ ಅರಸುವ ತಣ್ಣನೆ ಕೈಗಳು.
ನಿಟ್ಟುಸಿರಾಗಿದ್ದಕ್ಕೆ ಕಣ್ಣೀರೆ ಲೆಖ್ಖ ಇಡಬೇಕು...
ಒಂದು ಕ್ಷಣ ನೀನೆ
ಸುತ್ತ ಮತ್ತೇನಿದೆ
ನಾನು ಹುಡುಕುತಲಿದ್ದೆ
ನೀನೆಲ್ಲೊ ನಕ್ಕಂಗಿತ್ತು
ಕತ್ತಲೆ ತುಂಬಿದೆ
ತಾಕಿದ್ದು ನಿನ್ನ ಉಸಿರಾ..?
ಮೈಯಲ್ಲಿ ಸಣ್ಣ ನಡುಕು
ಬೆವೆತಷ್ಟೂ ಚಳಿ
ಸಣ್ಣಗೆ ಹೊರಳಿ
ನಿನ್ನ ತಡವುತ್ತೇನೆ
ಸಿಕ್ಕಷ್ಟು ಖಾಲಿ
ತಬ್ಬಿಕೊಳ್ಳೋಕೆ ಏನಿತ್ತು
ನೆನಪೊಂದು ತಣ್ಣಗೆ
ಕಣ್ಣೀರಾಗಿತ್ತು
ಹೇಗನಿಸುತ್ತದೆ ಈಗ
ಕಳೆದಿದ್ದು ಸಿಕ್ಕಂಗಾ
ಅದಕ್ಕೆಲ್ಲ ಲೆಖ್ಖವಿಲ್ಲ
ಕಳೆದಿದ್ದೆಷ್ಟು..?
.......
8 Comments:
Beautiful... u hv the skill to stretch the feelings, in way thatz not boring... keep it up!!! :-)
but why silent since February?
ri enadru bariri, iga hendthi bandmele hengide jeevana natha heli
bahala dinagallinda adenanno helabeku annistittu adre sariyaada shabda sikta irlilla... e post odidaaga naane maatadta ideeneno annistu..
btw its nice n very abstract. just nammellara manasina thara...
ಅಲೆಮಾರಿ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
ಅದಕ್ಕೆಲ್ಲ ಲೆಖ್ಖವಿಲ್ಲ
ಕಳೆದಿದ್ದೆಷ್ಟು..?
ಕಳೆದಿದ್ದು ಬರೋಬ್ಬರಿ 1 ವರ್ಷ 3 ತಿಂಗಳು ! :)
ತಾಕಿದ್ದು ನಿನ್ನ ಉಸಿರಾ..?
ಮತ್ತು
ತಬ್ಬಿಕೊಳ್ಳೋಕೆ ಏನಿತ್ತು
ನೆನಪೊಂದು ತಣ್ಣಗೆ
ಕಣ್ಣೀರಾಗಿತ್ತು
ಓಹ್!
ಮೇಲಿನ ಸಾಲುಗಳೊಂದಿಗಿಷ್ಟು ನಿಟ್ಟುಸಿರನ್ನ ಸೇರಿಸ ಬಹುದಷ್ಟೇ!
ನಿಮ್ಮ ಬರಹಗಳನ್ನ ಓದಬೇಕು ಅಂತ ತುಂಬಾ ಅನ್ನಿಸ್ತಿದೆ..
ದಯವಿಟ್ಟು ನಿಮ್ಮ ಓದುಗರಿಗೆ ಎನಾದ್ರೂ ಕೊಡಿ..
ಕಾಯ್ತಾ ಇದ್ದೀನಿ.
Post a Comment
<< Home