Friday, June 16, 2006

ಮುಂಗಾರು ಹೀಗೆನಾ!!!

ಶ್ರಾವಣ......ಗಾಳಿ ಮಳೆಯಿಂದ ನಡುಗಿದ ಭೂಮಿ ಸ್ವಲ್ಪ ವಿಶ್ರಾಂತಿ ಬಯಸಿ ತಣಿಯುವ ಕಾಲ....ಸುರಿವ ಮಳೆಯಲ್ಲೂ ಒಂದು Rhythm ಇರ್ತದ ಈಗ.....ವಸಂತ ಚಿಗುರಿಸಿದ ಆಸೆಯ ಮೊಳಕೆ ಗಟ್ಟಿಯಾಗಿ ನೆಲ ಕಚ್ಚಿ ಹಿಡಿದು ಹೊಸ ಜೀವನದ ಅಡಿಪಾಯ ಹಾಕಿ ಮುಗಿಲ ಮಳೆಗೆ ತನುವ ಬಿಚ್ಚಿ ನಗುವ ಸಮಯ..ಈಗಿನ ಮಳೆಯಲ್ಲೂ ಒಂದೊಂದು ವಿಧ ...ಬೆಳಿಗ್ಗೆ ಬಂದ್ರೆ ಸೂರ್ಯನ ಮುಖ ತೊಳೆದು ನಿಚ್ಚಳ ಮಾಡಿ ಒಂದು ಹೊಸದಿನದ ಹುಮ್ಮಸ್ಸು ಮೂಡಿಸುತ್ತೆ....ಮಧ್ಯಾಹ್ನ ಬಂದ್ರೆ ಬಿಸಿಲಿನ ಬೇಗೆ ಮರೆಸುತ್ತೆ ..ಇನ್ನು ಸಂಜೆ ಬಂದ್ರೆ ಕೇಳಲೇ ಬೇಡ..... ನೋಡುಗರ ಸ್ವರ್ಗ ...ಕವಿಗಳಿಗೆ ಹಬ್ಬ..ಪ್ರೇಮಿಗಳಿಗೆ ಬಾಚಿ ತಬ್ಬಿಕೊಳ್ಳೋಕೆ ಒಂದು ನೆಪ........ಅದೇ ರಾತ್ರಿ ಮಳೆ ಬಂದರೆ...ಮುಖೇಶನ Silent ಹಾಡು....ಕಗ್ಗದ ಸಾಲು.....ಗಾಲಿಬ್'ನ ಶಾಯರಿ....ಮರಳಿ ನೆನಪಿಗೆ ಬಂದ ಇಷ್ಟದ ಹಾಡು...ಏನೆಲ್ಲಾ ಅನಿಸುತ್ತೆ ಅಲ್ವಾ...
ರಾತ್ರಿ ಗುಡುಗು ಮಿಂಚಿನ ಮಳೆ ಬೀಳೊವಾಗ...ಕಿಟಕಿ ಹತ್ರ Bed ಮೇಲೆ ಕೂತ್ಗೊಂಡು...ಹೊರಗಡೆ ನೋಡತಾ ಇದ್ರೆ ಸಾಕು ...Time ಹೋಗಿದ್ದು ಗೊತ್ತಾಗೋದೇ ಇಲ್ಲಾ..ಮುಂದೆ ಪ್ರೀತಿಯ ಕನಸು ...ಹಿಂದೆ ಒಲವಿನ ನೆನಪು ಇದ್ರಂತು ಆಯ್ತು..........ಆ ಮಳೆಗೆ ಎನೋ ಕಳೆ ಇರ್ತದ..

ಮತ್ತೆ ಮನಸಿನಾಳದಿ ಮುಳುಗಿ..
ಜೀವ ಬೆಳಕ ಮಿಂದಿದೆ.....
ಹರ್ಷ ಸಲ್ಲಾಪ..
ಇನ್ನೂ ಸಂಕೋಚ
ಮನಸಿಗಾವ ಸರಸ ಬೆರೆತಿಹೆ...

ಪಂಚಮಿ....ಹೆಂಗಳೆಯರ ನೆಚ್ಚಿನ ಹಬ್ಬ...ತವರಿನ ಕೂಗಿಗೆ ಮಗಳು ಓಗೊಡುವ ಸಮಯ..ಮತ್ತೆ ಜೋಕಾಲಿ....ಅಕ್ಕರೆಯ ಗೆಳತಿಯರ ಒಡನಾಟ..ಹೊಸ ಬಳೆಗಳ ಕಿಂಕಿಣಿ ...ಇಷ್ಟ ದೇವತೆಗೆ ಭಕ್ತಿ-ಶೃಧ್ಧೆಯ ಅರ್ಪಣೆ...ಮನದಿ ಪ್ರಿಯನ ಸಲ್ಲಾಪ..ಅಶಾಢದ ವಿರಹದ ಕರಿ ಇರುಳ ಕತ್ತಲೆಯ ಬೇಗೆ ಕರಗಿ...ಸಮ್ಮಿಲನದ ಸಂತಸ..ಸಂಭ್ರಮ...ಶ್ರಾವಣಾ ಸೋಮವಾರಗಳ 'ಅಳ್ಳಿಕೇರಿ',ಎಂದಿನಿಂದಲೂ ಪ್ರಿಯ...ಮಾಡಿದ ತಿಂಡಿ ಸವಿಯಲು ಬಗೆ ಬಗೆಯ ನೆಪ ..ಪ್ರಕೃತಿಯಲ್ಲಿ ಎನೋ ಒಂದು ಆರ್ದೃತೆ ಮಮತೆ ....ಬೆಳಗಿನ ಮಂಜು...ಮಧ್ಯಾಹ್ನದ ಬಿಸಿಲು....ಸಂಜೆಯ ಮಳೆ ಎಲ್ಲವೂ ಹಿತ...ಮನೆ ಎಲ್ಲಾ ಗಡಿಬಿಡಿ ವಾತಾವರಣ...ಒಂದು ವಿಶಿಷ್ಟ ಸಂಭ್ರಮ....ದಿನ ಖಾಲಿ ಅನಿಸುವುದಿಲ್ಲಾ..ಎನಾದರೊಂದು ಕೆಲಸ......
ನಮ್ಮ ಸಂಸ್ಕೃತಿಯಲ್ಲಿ ಎಷ್ಟೊಂದು ಮೂಢ ನಂಬಿಕೆ ಇದ್ರೂ ಒಂದು Plus Point ಏನಂದ್ರೆ..ಈ ಆಚಾರಗಳು ಶೃಧ್ಧೆ-ಏಕಾಗ್ರತೆಯನ್ನ ಕೊಡ್ತವೆ....ಮನಸಿಗೊಂದು ಗುರಿ ಇರ್ತದ....ದಾರಿ ಸ್ಪಷ್ಟ...

ಉಯ್ಯಾಲೆಯ ತೂಗುವಾ ಪರಿ
ಸಿಹಿಯನು ಹಂಚುವಾ ಖುಷಿ
ಋತುವಿನ ಗಾನದಾ-ಸವಿ
ಅದಕ್ಕೆ ಅಲ್ವಾ ಹೇಳಿದ್ದು..........ರಸಮಯ ಸ್ನೇಹ-ಪಂಚಮಿ............

ಆಸೆಗಳ ಹುತ್ತದಿ ಕನಸಿನ ಹಾಲುಣಿಪ ಮನಸಿನ ನಾಗರಕೆ ...
ಹುಲು ಮಾನವನ ಮತ್ಸರಕೆ ಸ್ನೇಹ-ಪ್ರೀತಿಯೇ ಸರಿ ಕುಣಿಕೆ.....

0 Comments:

Post a Comment

<< Home