ನೆನಪಿಗೊಂದು ನೆಪ!!!!
ಈ ಚಿಕಾಗೋ ವೆದರ್ ಹೀಗೆನೇ..ಒಂದು ಕ್ಷಣ ಇದ್ದದ್ದು ಇನ್ನೊಂದು ಕ್ಷಣ ಇರಲ್ಲಾ
ನಿನ್ನೇನೆ ಬಿಸಿಲು ಒಂದು ಬೆಚ್ಚಗಿನ ಹೈ! ಹೇಳಿ ಬೆವರಿಳಿಸಿತ್ತು.ಇವತ್ತು ಸೂರ್ಯ ನಾಪತ್ತೆ.
ಅದೇ ಮಳೆಗಾಲದ ಬೆಂಗಳೂರ ಹವೆ.ಮೊಡ.. ಆಮೇಲೆ ಒಂದಷ್ಟು ಚಳಿ ಗಾಳಿ.
ಬರೀ ನೆನಪು ಮೆಲುಕು ಹಾಕೋದೆ ಸವಿ ಅನ್ಕೊಂಡಿರೋವಾಗ ಈ ದಿನಗಳು ಪ್ರತಿ ಕ್ಷಣದ ಸಂತೋಷ ಹೊತ್ತು ತಂದಾಗ ಬೇಸರಿಕೆ ಮರೆಯೋದು ಸುಳ್ಳಲ್ಲಾ..
ಅದು ಸಂಜೆ ಈ ಕೆರೆ ದಂಡೆ ಮೇಲಿನ ವಾಕ್ ಇರಬಹುದು..ರಾತ್ರಿಯ ನೀರವತೆಯಲ್ಲೊಂದು ಕೇಳದ ಪಿಸುಮಾತು
ಯಾವಾಗ್ಲೋ ಮರೆತು ಸುರಿಸಿ ಹೋಗೊ ಸಂಜೆ ಮಳೆ..
ಹೀಗೆ ಒಂದು ದಿನ ಮತ್ತೆ ಉರುಳುತ್ತದೆ..ಆದರೂ ನಾಳೆ ಕಾಯುವ ತಾಳ್ಮೆ ಕಡಿಮೆಯಾಗಿದೆಯೋ ಅಥವಾ ಈ ದಿನಗಳೇ ಇಷ್ಟೊಂದು ನಿಧಾನಾನೋ!!!
ಅದು ಹೇಗೆ ಇದ್ರೂ ಒಂದಂತು ನಿಜ.ಬಂದು ಒಂದು ತಿಂಗಳಾಯ್ತು ಆದ್ರೆ ನಿನ್ನೇನೆ ಮೈಸೂರಿಂದ ಬಸ್ ಹತ್ತಿದ ನೆನಪು....
ಮನಸಿನ ಪಟಲದಲ್ಲಿ ಆ ಕ್ಷಣಗಳು ಮರಳಿ ತಿರುಗುತ್ತಲೇ ಇರುತ್ತವೆ.
ಇಷ್ಟೊತ್ತಿಗಾಗ್ಲೆ ಬೆಂಗಳೂರು ಒಂದು ಮಳೆ ನೆನೆದು ಕ್ಲೀನ್ ಆಗಿರ್ತದ.ಈ ಸಲ ಗುಲ್ಮೊಹರ್ ಜಾಸ್ತೀ ನೋಡೋಕೆ ಆಗ್ಲಿಲ್ಲ ಅಂತಾ ಬೇಜಾರು ಅಷ್ಟೇ
ಆದರಲ್ಲೂ ಫೆಬ್ರವರಿ ನಲ್ಲಿ ಸುತ್ತಾಡೊಕೆ ಅನೇಕ ಕಾರಣಗಳು ಇರತಿದ್ವು..ಅಲ್ವಾ!!!!
ವಿಚಿತ್ರ ಅಂದ್ರೆಈ ಊರು ನನಗೆ ಚೆನ್ನೈ ನೆನಪಿಗೆ ತರ್ತದ!!!!......ಒಂದು ಕ್ಷಣ ಯೋಚಿಸಿದೆ
ಮರೀನ ಬೀಚ್ ತರದೊಂದು ಬೀಚು.ಆ ಕೂವಂ ತರದೊಂದು ನದಿ(!?!).ಒಂಟಿ ರಾತ್ರಿಗಳು.
..ನಿನ್ನ ಜೊತೆಗಿನ ಮಾತುಗಳು ಸರೀ ತಾನೆ!!!!.......
ಮನಸಿನ ಭಾವನೆಗಳು.....ಎಲ್ಲಿ ಇದ್ದರು ಬದಲಾಗಲ್ಲ ಅನ್ನೊದು ಎಷ್ಟು ನಿಜ.!!....ನಾವು ಆ ಜೀವನಕ್ಕೆ ಹೊಂದುಕೊಳ್ಳತೀವೆ ಹೊರತೂ ಒಳಗೆ ಯಾವಾಗ್ಲೂ ಅದೇ!!!
..ಒಂದಷ್ಟು ಕನಸು.ಹೊಸದೊಂದು ಕವನದ ಸಾಲು.ಕಾದಂಬರಿಯ ಆ ಮರೆಯದ ಮಾತು...ಹೀಗೆ ..ನಾಳೆ ಮತ್ತೆ ನಿನ್ನೆಯಾಗುವವರೆಗೆ
ಈಗಿನ ದಿನಗಳನ್ನು ಮುಂದೆ ಹೇಗೆ ನೆನಪಿಸಿಕೊಳ್ತೀನೊ ಗೊತ್ತಿಲ್ಲಾ.!!!!
0 Comments:
Post a Comment
<< Home